ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರಿಗೂ ಸಹ ಈಗಿನ ಕಾಲದಲ್ಲಿ ಸ್ವಂತ ಮನೆ ಮಾಡಿಕೊಳ್ಳಬೇಕೆ ಎನ್ನುವ ಕನಸು ನನಸಾಗಿಯೇ ಇರುತ್ತದೆ ಆದರೆ ಇದೀಗ ನಿಮ್ಮ ಸ್ವಂತ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರವು ನಿಮಗೆ ನೆರವು ನೀಡುತ್ತಿದೆ. ಮನೆ ಕಟ್ಟಲು ಕೆಲವೊಂದಿಷ್ಟು ಜನರಿಗೆ ಸಾಧ್ಯವಾಗುವುದಿಲ್ಲ ಆದರೆ ಇದೀಗ ಸರ್ಕಾರವೇ ಮನೆ ಕಟ್ಟಲು ಆಸೆ ಇರುವವರಿಗೆ ಸಹಾಯಮಾಡುತ್ತಿದೆ. ಸರ್ಕಾರದ ಈ ಯೋಜನೆ ಅಡಿಯಲ್ಲಿ ಸುಮಾರು 2.67 ಲಕ್ಷಗಳ ಸಾಲವನ್ನು ಪಡೆಯುವ ಮೂಲಕ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ. ಹಾಗಾದರೆ ಕೇಂದ್ರ ಸರ್ಕಾರದ ಆ ಯೋಜನೆಯದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ :
ಸ್ವಂತ ಮನೆಯನ್ನು ಹೊಂದುವ ಆಸೆಯನ್ನು ಇರುವ ಜನರಿಗೆ ಕೇಂದ್ರ ಸರ್ಕಾರವು ಸಹಾಯವನ್ನು ಮಾಡುತ್ತಿದೆ. ಮನೆ ಕಟ್ಟುವ ಜನರಿಗಾಗಿ ಆರ್ಥಿಕ ಸಹಾಯ ಮಾಡುವ ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಆಯ್ಕೆಯಾಗುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ಸಹಾಯವನ್ನು ಮಾಡುತ್ತದೆ ಇದೀಗ ಈ ಯೋಜನೆಯ ಪ್ರಯೋಜನವನ್ನು ಪಡೆಯುವವರಿಗೆ ಸಹಾಯ ಸಿಗುವ ಅಂದರೆ ಸಹಾಯಧನದ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಅರ್ಹರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಆದರೆ ಇದೀಗ ಕೆಲವೊಂದು ಬದಲಾವಣೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯ ನಿಯಮಗಳಲ್ಲಿ ಮಾಡಲಾಗಿದ್ದು ಪ್ರತಿಯೊಬ್ಬರಿಗು ಸಹ ಬದಲಾವಣೆಯ ಅನುಸಾರವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಈಗ ಸಿಗುವುದಿಲ್ಲ.
ಸಹಾಯಧನದ ಮೊತ್ತ ಹೆಚ್ಚಳ :
ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ಸಿಗುವವರಿಗೆ ನೀಡುವ ಸಹಾಯಧನದ ಮೊತ್ತವನ್ನು ಈಗ ಹೆಚ್ಚಿಸಲಾಗಿದ್ದು ಮೂರು ಲಕ್ಷಕ್ಕಿಂತ ಹೆಚ್ಚಿನ ಮೊತ್ತವು ಸಿಗಲಿದೆ. ಮೂರರಿಂದ ಐದು ಲಕ್ಷದವರೆಗೆ ಸಹಾಯಧನವನ್ನು ಪಡೆಯಬಹುದಾಗಿತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023ರ ಈ ವರ್ಷದಲ್ಲಿ ಮನೆ ಇಲ್ಲದವರಿಗೆ ಆಶ್ರಯ ಸಿಗಬೇಕೆಂಬ ಯೋಜನೆಯನ್ನು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ನಿರಾಶ್ರಿತರೇ ಇರಬಾರದು ಅಂದರೆ ಇನ್ನೂ ಎರಡು 2023 24 ನೇ ಸಾಲಿನಲ್ಲಿ ಇರಬಾರದು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ನಿರ್ಧಾರ ಮಾಡಿದ್ದು ಇದರ ಪ್ರಯೋಜನ ಜನರಿಗೆ ಸಿಗಲಿದೆ. ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಪ್ರತಿಯೊಬ್ಬ ಫಲಾನುಭವಿಗಳಿಗೆ ಮೂರರಿಂದ ಐದು ಲಕ್ಷದವರೆಗೆ ಸಹಾಯಧನ ಲಭ್ಯವಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ವಿಧ :
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ವಿಧಗಳಿದ್ದು ಒಂದು ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತೊಂದು ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಆಗಿದೆ. ಇಂದಿರಾ ಗಾಂಧಿ ಆವಾಸ್ ಯೋಜನೆ ಎಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಯೋಜನೆಯನ್ನು ಕರೆಯಲಾಗುತ್ತಿತ್ತು ಆದರೆ ಇದರ ಹೆಸರನ್ನು 2016 ಮಾರ್ಚ್ ನಲ್ಲಿ ಬದಲಾಯಿಸಲಾಯಿತು.
ಈ ಯೋಜನೆಗೆ ಸಂಬಂಧಪಟ್ಟಂತೆ ಮಾಹಿತಿ :
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಬಳಸುವ ಪ್ರಮುಖ ಶರತ್ತುಗಳೆಂದರೆ ಒಮ್ಮೆ ಮಾತ್ರ ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೀವೇನಾದರೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಮೊದಲ ಬಾರಿಗೆ ನೀಡಿದರೆ ಆ ಯೋಜನೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಎಲ್ಲಾ ಫಲಾನುಭವಿಗಳಿಗೆ ವಾರ್ಷಿಕವಾಗಿ ಕೇವಲ 6.5% ಬಡ್ಡಿದರದಲ್ಲಿ 20 ವರ್ಷಗಳವರೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ವಸತಿ ಸಾಲ ನೀಡಲಾಗುತ್ತದೆ.
ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ನೆಲ ಮಹಡಿಯಲ್ಲಿರುವ ಮನೆಗಳು ಮಾತ್ರ ಮೀಸಲಾಗಿದ್ದು ಗೃಹ ನಿರ್ಮಾಣದಲ್ಲಿ ಸುಸ್ಥಿರ ಪರಿಸರ ಸ್ನೇಹಿತರ ಜ್ಞಾನವನ್ನು ಈ ಯೋಜನೆಯಡಿಯಲ್ಲಿ ಬಳಸಲಾಗುತ್ತದೆ. ಸರ್ಕಾರವು ಡಿಸೆಂಬರ್ 31 2024ರ ವರೆಗೆ ಪ್ರಧಾನಮಂತ್ರಿ ಅವಾಸ ಯೋಜನೆಯ ಪ್ರಯೋಜನವನ್ನು ಪಡೆಯುವ ಗಡುವನ್ನು ವಿಸ್ತರಿಸಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://pmaymis.gov.in/ಅಲ್ಲದೆ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಟೋಲ್ ಫ್ರೀ ನಂಬರ್ ಗಳಾದ 1800-11-6163, 1800 11 3388,1800 11 3377 ಈ ನಂಬರ್ ಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಹೀಗೆ ಇವುಗಳಿಗೆ ಕರೆ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ನೀವು ನೇರವಾಗಿ ವಸತಿ ನಗರ ವ್ಯವಹಾರಗಳ ಸಚಿವಾಲಯ ನಿರ್ಮಾಣ ಭವನ ನವದೆಹಲಿ,110011 ಇಲ್ಲಿಗೂ ಸಹ ಭೇಟಿ ನೀಡಬಹುದಾಗಿದೆ. 011 2306 3285,011 2306 0484 ಈ ನಂಬರ್ ಗಳಿಗೂ ಸಹ ಸಂಪರ್ಕಿಸಬಹುದಾಗಿದೆ ಹೀಗೆ ಈ ಯೋಜನೆಗೆ ಸಂಬಂಧಪಟ್ಟಂತೆ ಇಷ್ಟು ಮಾಹಿತಿಯನ್ನು ನೀಡಲಾಗಿದೆ.
ಇದನ್ನು ಓದಿ : ವಿದ್ಯಾರ್ಥಿನಿಯರಿಗೆ ವಿಶೇಷ ಸ್ಕಾಲರ್ಶಿಪ್ : ಇಂದಿರಾಗಾಂಧಿ ಸ್ಕಾಲರ್ಶಿಪ್
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ,ಬಿಪಿಎಲ್ ಕಾರ್ಡ್ ಹೊಂದಿರುವವರು, ಕೂಲಿ ಕಾರ್ಮಿಕರು, ಅರೆಸೇನಾ ಪಡೆಗಳು, ಅಲ್ಪಸಂಖ್ಯಾತರು ,ಮಾಜಿ ಸೈನಿಕರು, ವಿಧವೆಯರು ಹಾಗೂ ನಿವೃತ್ತಿ ಹೊಂದಿದವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://pmaymis.gov.in/open/Check_Aadhar_Existence.aspx?comp=b ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮನೆ ಕಟ್ಟಲು ಸಹಾಯಧನವನ್ನು ಪಡೆಯಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಸ್ವಂತ ಮನೆಯನ್ನು ಕಟ್ಟಲು ಕನಸನ್ನು ಹೊಂದಿರುವ ಜನರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ 5 ಲಕ್ಷದವರೆಗೆ ಸಹಾಯಧನವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಮನೆಯನ್ನು ಕಟ್ಟಲು ಬಯಸುತ್ತಿದ್ದರೆ ಅವರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ಲಭ್ಯವಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ
ವಿಚ್ಛೇದನದಲ್ಲಿ ಹೊಸ ನಿಯಮ; ವಿಚ್ಛೇದನದ ನಂತರವೂ ಜೀವನಾಂಶ ಕೋಡಬೇಕೋ? ಬೇಡವೋ?